ಬಾದಾಮಿಯಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಇದು ರಾಮಸೇನೆಯೋ ಅಥವಾ ರಾವಣ ಸೇನೆಯೋ ಗೊತ್ತಾಗುತ್ತಿಲ್ಲ. ಕೋಮು ದ್ವೇಷ ಭಾವನೆ ಬಿಟ್ಟು ಎಲ್ಲವೂ ತಣ್ಣಗಾಗಬೇಕು ಎಂದು ಜನರು ಬಯಸಿದಾಗಲೆಲ್ಲ ಜಾತಿ–ಜನಾಂಗದ ನಡುವೆ ಸಾಮರಸ್ಯ ಕೆಡಿಸುವ ಕೆಲಸ ಈ ಸಂಘಟನೆಗಳಿಂದ ಮತ್ತೆ ಮತ್ತೆ ನಡೆಯುತ್ತಿದೆ’ ಎಂದು ಬೇಸರ ವ್ಯಕ್ತಪಡಿಸಿದರು.