ಪುಸ್ತಕ ಬಹುಮಾನ: ‘ದ ಬ್ರೈಡ್ ಇನ್ ದ ರೈನಿ ಮಂಟೆನ್ಸ್ (ಮಲೆಗಳಲ್ಲಿ ಮದುಮಗಳು ಕಾದಂಬರಿಯ ಅನುವಾದ)–ಡಾ.ಕೆಂ. ಶ್ರೀನಿವಾಸಗೌಡ ಮತ್ತು ಜಿ.ಕೆ. ಶ್ರೀಕಂಠಮೂರ್ತಿ (ಕನ್ನಡದಿಂದ ಇಂಗ್ಲಿಷಿಗೆ), ‘ನನ್ನ ಬದುಕಿನ ಕಥೆ’–ಶ್ರುತಿ ಬಿ.ಎಸ್. (ಇಂಗ್ಲಿಷ್ನಿಂದ ಕನ್ನಡಕ್ಕೆ), ‘ಭೂತನಾಥ’–ಡಾ. ನಾಗಾ ಎಚ್.ಹುಬ್ಳಿ (ಇಂಗ್ಲಿಷ್ ಹೊರತಾಗಿ ಬೇರೆ ಭಾರತೀಯ ಭಾಷೆಗಳಿಂದ ಕನ್ನಡಕ್ಕೆ), ‘ವಿಶ್ವನಾಥ ಸತ್ಯನಾರಾಯಣ’–ಟಿ.ಎಸ್. ನಾಗಾರಾಜ ಶೆಟ್ಟಿ (ಇಂಗ್ಲಿಷ್ ಹೊರತಾಗಿ ಬೇರೆ ಭಾರತೀಯ ಭಾಷೆಗಳಿಂದ ಕನ್ನಡಕ್ಕೆ), ‘ರುಚಿರಾ:ಬಾಲಕಥಾ’–ಡಾ. ನಾಗರತ್ನಾ ಹೆಗಡೆ (ಕನ್ನಡದಿಂದ ಬೇರೆ ಭಾರತೀಯ ಭಾಷೆಗಳಿಗೆ)ಅವರು ‘ಪುಸ್ತಕ ಬಹುಮಾನಕ್ಕೆ’ ಆಯ್ಕೆಯಾಗಿದ್ದಾರೆ ಎಂದು ಪ್ರಾಧಿಕಾರದ ರಿಜಿಸ್ಟ್ರಾರ್ ಈಶ್ವರ ಕು. ಮಿರ್ಜಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.