ಬೆಂಗಳೂರು: ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಅವರೇ, ರಾಜ್ಯದಲ್ಲಿ ವೇಂಟಿಲೇಟರ್ ಕೊರತೆ ನೀಗಿಸಲು ಇನ್ನೆಷ್ಟು ದಿನ ಬೇಕು? ಎಂದು ಕಾಂಗ್ರೆಸ್ ಪ್ರಶ್ನಿಸಿದೆ.
ಈ ಕುರಿತು ಸರಣಿ ಟ್ವೀಟ್ ಮಾಡಿರುವ ಕಾಂಗ್ರೆಸ್, ‘ರಾಜ್ಯದ ವೈದ್ಯಕೀಯ ಕ್ಷೇತ್ರದ ದುರಾವಸ್ಥೆಯ ಬಗ್ಗೆ ಬಿಜೆಪಿ ಶಾಸಕರೇ ಆರೋಗ್ಯ ಸಚಿವರಿಗೆ ತರಾಟೆ ತೆಗೆದುಕೊಳ್ಳುವ ಮೂಲಕ ತೆರೆದಿಟ್ಟಿದ್ದಾರೆ’ ಎಂದು ವಾಗ್ದಾಳಿ ನಡೆಸಿದೆ.
‘ಸುಧಾಕರ್ ಅವರೇ, ಕೊರೊನಾ ತಗ್ಗಿದ ಸಮಯದಲ್ಲಿಯೇ ವೆಂಟಿಲೇಟರ್ ಕೊರತೆ ಇದೆ ಎಂದರೆ ಕೊರೊನಾ ಸಮಯದಲ್ಲಿನ ಕೊರತೆಯಿಂದಾದ ಸಾವು, ನೋವು ಸಂಭವಿಸಿರಬಹುದು? ಎಂದು ಕಾಂಗ್ರೆಸ್ ಪ್ರಶ್ನಿಸಿದೆ.
‘ಪ್ರತಿನಿತ್ಯ ಪ್ರಧಾನಿ ಮೋದಿ ಅವರ ಮುಖಸ್ತುತಿಯಲ್ಲಿ ತೊಡಗುವ ಬಿಜೆಪಿಗರು ಕೇಂದ್ರದ ವಿಷಯ ನಮ್ಮನ್ನೇಕೆ ಕೇಳುತ್ತಿದ್ದೀರಿ ಎನ್ನುವ ಮೂಲಕ ಸದನದಲ್ಲಿ ಬೆಲೆ ಏರಿಕೆಯ ಚರ್ಚೆಯಿಂದ ಪಲಾಯನ ಮಾಡಲು ಯತ್ನಿಸುತ್ತಿದೆ. ಮೋದಿ ಮುಖ ತೋರಿಸಿ ಮತ ಪಡೆದ ಬಿಜೆಪಿಗರು ಇಂದು ಮೋದಿಯವರು ನಿರ್ಮಿಸಿದ ಅನಾಹುತಗಳಿಗೆ ಉತ್ತರಿಸಲಾಗದೆ ಜಾರಿಕೊಳ್ಳುವುದು ಹಾಸ್ಯಾಸ್ಪದ’ ಎಂದು ಕಾಂಗ್ರೆಸ್ ಮತ್ತೊಂದು ಟ್ವೀಟ್ ಮಾಡಿದೆ.
ರಾಜ್ಯದ ವೈದ್ಯಕೀಯ ಕ್ಷೇತ್ರದ ದುರಾವಸ್ಥೆಯನ್ನ ಬಿಜೆಪಿ ಶಾಸಕರೇ ಆರೋಗ್ಯ ಸಚಿವರಿಗೆ ತರಾಟೆ ತೆಗೆದುಕೊಳ್ಳುವ ಮೂಲಕ ತೆರೆದಿಟ್ಟಿದ್ದಾರೆ@mla_sudhakar ಅವರೇ, ಕರೋನಾ ತಗ್ಗಿದ ಸಮಯದಲ್ಲಿಯೇ ವೆಂಟಿಲೇಟರ್ ಕೊರತೆ ಇದೆ ಎಂದರೆ ಕರೋನಾ ಸಮಯದಲ್ಲಿನ ಕೊರತೆಯಿಂದಾದ ಸಾವು, ನೋವು ಎಸ್ಟಿರಬಹುದು?
ಪ್ರತಿನಿತ್ಯ @narendramodi ಅವರ ಮುಖಸ್ತುತಿಯಲ್ಲಿ ತೊಡಗುವ ಬಿಜೆಪಿಗರು ಕೇಂದ್ರದ ವಿಷಯ ನಮ್ಮನ್ನೇಕೆ ಕೇಳುತ್ತಿದ್ದೀರಿ ಎನ್ನುವ ಮೂಲಕ ಸದನದಲ್ಲಿ ಬೆಲೆ ಏರಿಕೆಯ ಚರ್ಚೆಯಿಂದ ಪಲಾಯನ ಮಾಡಲು ಯತ್ನಿಸುತ್ತಿದೆ.
ಮೋದಿ ಮುಖ ತೋರಿಸಿ ಮತ ಪಡೆದ @BJP4Karnataka ಮೋದಿಯವರು ನಿರ್ಮಿಸಿದ ಅನಾಹುತಗಳಿಗೆ ಉತ್ತರಿಸಲಾಗದೆ ಜಾರಿಕೊಳ್ಳುವುದು ಹಾಸ್ಯಾಸ್ಪದ!