ಒಂದೇ ನಕಲು ಅವಾರ್ಡ್ ಪ್ರತಿ ಮತ್ತು ಪೇಮೆಂಟ್ ವೋಚರ್ ಬಳಿಸಿ ಇಬ್ಬರಿಗೆ, ಮೂವರಿಗೆ ಅಧಿಕೃತ ಜ್ಞಾಪನಾ ಪತ್ರ ನೀಡಿ, ಅಕ್ರಮವಾಗಿ ಜಮೀನು ಮಂಜೂರಾತಿ ಮಾಡಿರುವ 41 ಪ್ರಕರಣಗಳು, 1970 ರಿಂದ 2015ರ ವರೆಗೆ ಸಂತ್ರಸ್ತರ ದಾಖಲೆಗಳನ್ನು ಬಳಸಿಕೊಂಡು ಎರಡನೇ ಬಾರಿಗೆ ಜಮೀನು ಮಂಜೂರಾತಿ ಮಾಡಿಸಿಕೊಂಡಿದ್ದ 62 ಪ್ರಕರಣಗಳು, ತಹಶೀಲ್ದಾರರಿಂದ ಸಾಗುವಳಿ ಚೀಟಿ ವಿತರಿಸಿ ಪೋಡಿ ಖಾತೆ ಮಾಡಿರುವ 14 ಪ್ರಕರಣಗಳು, ಮರ ಮಾಲ್ಕಿ ನಿಗದಿಯಾಗದೆ ಸಾಗುವಳಿ ಚೀಟಿ ನೀಡಿರುವ 837 ಪ್ರಕರಣಗಳು, ವಿಶೇಷ ಭೂ ಸ್ವಾಧೀನಾಧಿಕಾರಿಗಳಾಗಿದ್ದ ಶ್ರೀನಿವಾಸಗೌಡ ಅವರು 2018–19ರಲ್ಲಿ ಮಂಜೂರು ಮಾಡಿದ್ದ 648 ಪ್ರಕರಣ ಹಾಗೂ ಬಿ.ಎ.ಜಗದೀಶ್ ಅವಧಿಯಲ್ಲಿನ ಅನಧಿಕೃತ 40 ಮಂಜೂರಾತಿ ಪ್ರಕರಣಗಳನ್ನು ರದ್ದುಗೊಳಿಸಲಾಗಿದೆ.