ಸರಗೂರು ತಾಲ್ಲೂಕಿನ ಮೂಳ್ಳೂರು ಗ್ರಾಮದ ಗುರುಲಿಂಗಯ್ಯ ಎಂಬುವರು ಪಕ್ಷೇತರ ಅಭ್ಯರ್ಥಿಯಾಗಿ ಉಮೇದುವಾರಿಕೆ ಸಲ್ಲಿಸಿದ್ದಾರೆ. ಪ್ರಮಾಣಪತ್ರದ ಎಲ್ಲಾ ಕಾಲಂಗಳಲ್ಲಿ ‘ಇಲ್ಲ’ ಎಂದು ನಮೂದಿಸಿದ್ದಾರೆ. ಕೈಯಲ್ಲೂ, ಬ್ಯಾಂಕ್ನಲ್ಲೂ ಹಣವಿಲ್ಲ, ಸ್ವಯಾರ್ಜಿತ, ಪಿತ್ರಾರ್ಜಿತ ಆಸ್ತಿ ಇಲ್ಲ ಎಂದು ಬರೆದಿದ್ದಾರೆ. ಸಮಾಜ ಸೇವೆ ಮಾಡುವುದಾಗಿ ನಮೂದಿಸಿದ್ದಾರೆ.