ಅವರು ಮನುಷ್ಯರಲ್ಲವೆ?: ‘2006ರ ನಂತರ ನೇಮಕಾತಿ ಹೊಂದಿದ ಸರ್ಕಾರಿ ನೌಕರರಿಗೆ ಎನ್ಪಿಎಸ್ ಕಡ್ಡಾಯ ಮಾಡಲಾಗಿದೆ. 2006ರ ನಂತರ ಆಯ್ಕೆಯಾದ ಶಾಸಕರು, ಸಂಸದರು, ಸಚಿವರಿಗೆ ಒಪಿಎಸ್ ನೀಡಲಾಗುತ್ತಿದೆ. ಸರ್ಕಾರಿ ನೌಕರರು ಮನುಷ್ಯರಲ್ಲವೆ? ಎನ್ಪಿಎಸ್ ಒಳ್ಳೆಯ ಯೋಜನೆಯೇ ಆಗಿದ್ದರೆ ಶಾಸಕರು, ಸಂಸದರು, ಸಚಿವರಿಗೂ ಅದನ್ನೇ ನೀಡಬೇಕು’ ಎಂದು ಬಿಜೆಪಿಯ ಆಯನೂರು ಮಂಜುನಾಥ್ ಆಗ್ರಹಿಸಿದರು.