ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿ ಕೆ.ಆರ್.ವೇಣುಗೋಪಾಲ್, ‘ಸಂಗೀತ ಹಾಗೂ ಯೋಗ ದಿನಗಳನ್ನು ಒಂದೇ ದಿನ ಆಚರಿಸಲಾಗುತ್ತಿದೆ. ಸಂಗೀತ ಮನಸ್ಸಿನ ಆರೋಗ್ಯವಾದರೆ, ಯೋಗ ಶರೀರದ ಆರೋಗ್ಯ.ಸಂಗೀತ ನಾರದರಿಂದ ಬಂದರೂ ಅದಕ್ಕೆ ಗ್ರೀಕ್ನಿಂದ ಅಡಿಪಾಯ ಸಿಕ್ಕಿದೆ. ಸಂಗೀತದಿಂದ ಮನಸ್ಸಿನ ದುಗುಡಗಳು ದೂರವಾಗಿ, ನೆಮ್ಮದಿ ನೆಲೆಸುತ್ತದೆ’ ಎಂದು ಹೇಳಿದರು.