ಸಭಾಪತಿ ಪೀಠದ ಬಳಿ ಗುಂಪುಗೂಡಿ ಬಲ ಪ್ರಯೋಗ ಮಾಡಿದ ಬಿಜೆಪಿಯ ಆಯನೂರು ಮಂಜುನಾಥ್, ಎನ್. ರವಿಕುಮಾರ್, ತೇಜಸ್ವಿನಿ ಗೌಡ, ಪುಟ್ಟಣ್ಣ, ಸುನಿಲ್ ವಲ್ಯಾಪುರೆ, ಜೆಡಿಎಸ್ನ ಗೋವಿಂದರಾಜು, ರಮೇಶ್ ಗೌಡ, ಶ್ರೀಕಂಠೇಗೌಡ ಅವರು ಅಸಂಸದೀಯ ಚಟುವಟಿಕೆಗಳಲ್ಲಿ ತೊಡಗಿದ್ದರಿಂದ ಇವರ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ರಮೇಶ್ ಆಗ್ರಹಿಸಿದ್ದಾರೆ.