ಹೊಸದುರ್ಗ: ‘ಲಿಂಗಾಯತ ಧರ್ಮ ಸ್ವತಂತ್ರ ಧರ್ಮ. ಇದಕ್ಕೆ ಮಾನ್ಯತೆ ಕೊಡುವಂತೆ ಸರ್ಕಾರಕ್ಕೆ ಶಾಸಕರು ಒತ್ತಡ ತಂದರೆ ಅದಕ್ಕೆ ನಮ್ಮ ಬೆಂಬಲವಿದೆಯೇ ಹೊರತು ಮೀಸಲಾತಿಗಾಗಿ ಅಲ್ಲ. ಎಲ್ಲರೂ ಮೀಸಲಾತಿ ಬೇಕು ಎಂದು ಒತ್ತಡ ತಂದರೆ ಸರ್ಕಾರ ಏನು ಮಾಡಲು ಸಾಧ್ಯ? ದುಡಿಯುವ ವರ್ಗ ಹೆಚ್ಚಾಗುವಂತೆ, ಬೇಡುವ ವರ್ಗ ಕಡಿಮೆಯಾಗುವಂತೆ ಯೋಜನೆಗಳನ್ನು ಸರ್ಕಾರ ಕೈಗೊಳ್ಳಲಿ’ ಎಂದು ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಒತ್ತಾಯಿಸಿದರು.