ಬೆಳಗಾವಿ: ಗೋಕಾಕ ತಾಲ್ಲೂಕಿನ ಕುಲಗೋಡ ಬಸ್ ನಿಲ್ದಾಣದಲ್ಲಿ ಶನಿವಾರ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡುವಾಗ ಎನ್ಡಬ್ಲ್ಯುಕೆಎಸ್ಆರ್ಸಿಟಿ ಬಸ್ ನಿರ್ವಾಹಕ ಆದಂ ಜಮಾದಾರ ಅವರು ವಿನಾಯಕನನ್ನು ಸ್ತುತಿಸಿದ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಆದಂ ಅವರಿಗೆ ನೆಟ್ಟಿಗರಿಂದ ಮೆಚ್ಚುಗೆಯ ಮಹಾಪೂರ ಹರಿದುಬಂದಿದೆ. ‘ಇದು ಸೌಹಾರ್ದದ ಸಂಕೇತ’ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.
ಅವರು ರಂಗಭೂಮಿ ಕಲಾವಿದರೂ ಹೌದು. ರಾಷ್ಟ್ರ ನಾಯಕರ ಜಯಂತಿ ಸಂದರ್ಭದಲ್ಲಿ ಅವರ ವೇಷಭೂಷಣ ಧರಿಸುವ ಹವ್ಯಾಸವೂ ಅವರಿಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.