‘ಆರೋಪಿಯು ವೆಬ್ಸೈಟ್ವೊಂದರಲ್ಲಿ ಕಲಾಕೃತಿಗಳನ್ನು ಹರಾಜಿಗೆ ಇಟ್ಟಿದ್ದ. ಹಳೆಯ ಮನೆ ಕೆಡವುವಾಗ ಸಿಕ್ಕಿದವು ಎಂದು ಫೇಸ್ಬುಕ್ ಪುಟದಲ್ಲಿ ಬರೆದುಕೊಂಡಿದ್ದ. ₹ 4.50 ಲಕ್ಷದವರೆಗೂ ಹರಾಜು ಕೂಗಲಾಗಿದೆ ಎಂಬ ಮಾಹಿತಿ ತಿಳಿದ ಬಳಿಕ ಖರೀದಿದಾರರಂತೆಯೇ ಫೇಸ್ಬುಕ್ ಮೂಲಕವೇ ಸಂಪರ್ಕಿಸಿ, ಬಂಧಿಸಲಾಯಿತು. ವಿಷ್ಣುವಿನ ದಶಾವತಾರಗಳ ಚಿತ್ರಗಳಿದ್ದ ಈ ಕಲಾಕೃತಿಗಳ ರೇಖೆಗಳ ಮೇಲೆ ಚಿನ್ನದ ಲೇಪನವಿದೆ’ ಎಂದು ತಿಳಿಸಿದರು.