’ಅಷ್ಟಕ್ಕೂ ಯತ್ನಾಳ ಮಾತನಾಡುವುದು ಸರಿ ಅಥವಾ ತಪ್ಪು ಎಂದು ನಾನ್ಯಾಕೆ ವಿಮರ್ಶೆ ಮಾಡಲಿ‘ ಎಂದು ಮರು ಪ್ರಶ್ನಿಸಿದ ಮಾಧುಸ್ವಾಮಿ, ಅದಕ್ಕೆ ಉತ್ತರ ಕೊಡುವಷ್ಟು ಸಮರ್ಥ ನಾನಲ್ಲ. ನನ್ನ ಖಾತೆಯಲ್ಲಿಸಿಎಂ ಪುತ್ರ ವಿಜಯೇಂದ್ರ ಅಥವಾ ಬೇರೆ ಯಾರೂ ಹಸ್ತಕ್ಷೇಪ ಮಾಡುತ್ತಿಲ್ಲ. ಬಹುಶಃ ಯಾರೂ ಮಾಡೋದು ಇಲ್ಲ ಎಂದು ಭಾವಿಸಿದ್ದೇನೆ. ಹಾಗೆ ಮಾಡಿದರೆ ಸಹಿಸಿಕೊಳ್ಳುವವರಲ್ಲನಾವು ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.