ಈ ವಿಚಾರವಾಗಿ ಸರಣಿ ಟ್ವೀಟ್ ಮಾಡಿರುವ ಕೆಪಿಸಿಸಿ, ‘ಬಿಜೆಪಿಯ ಧಮನಕಾರಿ ನೀತಿಗಳಿಂದ ಕಾಂಗ್ರೆಸ್ನ ಧ್ವನಿಯನ್ನು ಅಡಗಿಸಲಾಗದು. ರಾಜ್ಯಸಭೆ ವಿಪಕ್ಷ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಅವರು ಸಂಸತ್ ಅಧಿವೇಶನದಲ್ಲಿ ಇರುವಾಗಲೇ ಸರ್ಕಾರ ಇಡಿಯಿಂದ ಸಮನ್ಸ್ ಜಾರಿ ಮಾಡಿಸಿ ಸಂಸತ್ತಿನಲ್ಲಿ ಖರ್ಗೆಯವರ ಪ್ರಶ್ನೆಗಳ ದಾಳಿಯಿಂದ ತಪ್ಪಿಸಿಕೊಳ್ಳಲು ಯತ್ನಿಸಿದೆ’ ಎಂದು ಹರಿಹಾಯ್ದಿದೆ.