ಸುದ್ದಿಗಾರರ ಜೊತೆ ಮಾತನಾಡಿರುವ ಅವರು ‘ಹಿಂದೂ ದೇವರನ್ನು ಕೆತ್ತನೆ ಮಾಡಲು ಒಂದು ಪದ್ಧತಿ, ಸಂಪ್ರದಾಯವಿದೆ. ಅನ್ಯ ಧರ್ಮೀಯರು ಕೆತ್ತನೆ ಮಾಡಿದ ದೇವರಮೂರ್ತಿಯ ಪ್ರತಿಷ್ಠಾನೆಯನ್ನು ಶಾಸ್ತ್ರ ಒಪ್ಪುವುದಿಲ್ಲ. ಶಾಸ್ತ್ರ ಪ್ರಕಾರವಾಗಿ ವಿಶ್ವಕರ್ಮ ಸಮುದಾಯದ ಕುಶಲಕರ್ಮಿಗಳು ಮಾತ್ರ ದೇವರ ಮೂರ್ತಿ ತಯಾರಿಸುತ್ತಾರೆ. ಮುಸ್ಲಿಮರು ಹಿಂದೂ ದೇವರ ಮೂರ್ತಿ ಕೆತ್ತನೆ ಮಾಡುವುದೇ ಅಪರಾಧ’ ಎಂದರು.