‘ನಂದೀಶ್ ನಮ್ಮ ಸಮುದಾಯದವರು. ಅವರು ಹೃದಯಾಘಾತದಿಂದ ಮೃತಪಟ್ಟಿರುವ ಕುರಿತು ಅಲ್ಲಿ ಹಿಂದೆ ಇನ್ಸ್ಪೆಕ್ಟರ್ ಹುದ್ದೆಯಲ್ಲಿದ್ದ ಅಧಿಕಾರಿ ದೂರವಾಣಿ ಕರೆಮಾಡಿ ತಿಳಿಸಿದ್ದರು. ಆಗ ಮೃತರ ಕುಟುಂಬಕ್ಕೆ ಸಾಂತ್ವನ ಹೇಳುವುದಕ್ಕಾಗಿ ಹೋಗಿದ್ದೆ. 70ರಿಂದ 80 ಲಕ್ಷ ಕೊಟ್ಟು ಇನ್ಸ್ಪೆಕ್ಟರ್ ಹುದ್ದೆಗೆ ಬಂದಿದ್ದು, ಅಮಾನತಾಗಿದ್ದರಿಂದ ಒತ್ತಡದಲ್ಲಿದ್ದರು ಎಂದು ನಮ್ಮ ಪಕ್ಷದ ಕಾರ್ಯಕರ್ತರು ಹೇಳಿದರು.