‘ನನ್ನ ಜಾತಿ, ಜನ್ಮದ ಮೂಲದ ಬಗ್ಗೆ ತಿಳಿಯಬೇಕಿದ್ದರೆ ನನ್ನ ಕ್ಷೇತ್ರಕ್ಕೆ ಬಂದುವಾಸ್ತವ ಏನೆಂಬುದನ್ನು ಆಂಜನೇಯ ತಿಳಿದುಕೊಳ್ಳಲಿ. ನಾನು ಕರ್ನಾಟಕದವನು, ಅಪ್ಪಟ ಕನ್ನಡಿಗ. ಬೀದರ್ ಜಿಲ್ಲೆ ಔರಾದ್ ತಾಲ್ಲೂಕಿನ ಬೋಂತಿ ತಾಂಡಾ ನನ್ನ ಹುಟ್ಟೂರು. ಪರಿಶಿಷ್ಟ ಜಾತಿಯ (ಎಸ್.ಸಿ) ಲಂಬಾಣಿ ಜನಾಂಗಕ್ಕೆ ಸೇರಿದ್ದೇನೆ. ಯಾರೋ ಕುತಂತ್ರಿಗಳು ನೀಡಿದ ಸುಳ್ಳು ಮಾಹಿತಿ ನಂಬಿದ ಆಂಜನೇಯ ಅವರು, ನಾನು ಮಹಾರಾಷ್ಟ್ರದಿಂದ ಬಂದವನು ಎಂದು ಆರೋಪಿಸಿದ್ದಾರೆ’ ಎಂದು ಚವ್ಹಾಣ್ ಹೇಳಿದ್ದಾರೆ.