ಮಂಡ್ಯ: ‘ಅಪ್ಪುಪಪ್ಪು ದೇಶದಲ್ಲಿ ಪಾದಯಾತ್ರೆ ಮಾಡುತ್ತಿದ್ದಾರೆ. ಅವರ ಗಡ್ಡ ಬೆಳೆದಿದೆಯೇ ಹೊರತು ಬುದ್ಧಿ ಬೆಳೆದಿಲ್ಲ’ ಎಂದು ಕಾಂಗ್ರೆಸ್ ನಾಯಕ ರಾಹುಲ್ಗಾಂಧಿ ಅವರನ್ನು ಜಿಲ್ಲಾ ಉಸ್ತುವಾರಿ ಸಚಿವ ಆರ್.ಅಶೋಕ ಟೀಕಿಸಿದರು.
ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಆಡಳಿತಕ್ಕೆ ಅವಕಾಶ ಸಿಕ್ಕಿಲ್ಲ ಎಂದಾಗ ಪಾದಯಾತ್ರೆ ಮಾಡಬೇಕು. ಆದರೆ ಅವರ ನಾಲ್ಕು ತಲೆಮಾರಿಗೆ ಅವಕಾಶ ದೊರಕಿದೆ. ಆಗ ಅವರು ದೇಶ ಲೂಟಿ ಮಾಡಿದರು. ಪಂಚರತ್ನ ಯಾತ್ರೆ ಮಾಡಿರುವ ಜೆಡಿಎಸ್ನವರನ್ನು ಅಲ್ಲಿಂದಲೂ ಜನ ಖಾಲಿ ಮಾಡಿಸುತ್ತಾರೆ’ ಎಂದರು.
‘ಸಿದ್ದರಾಮಯ್ಯ ಅವರ ತಲೆ ಮೇಲೆ ಬೂತಯ್ಯನ ಮಗ ಅಯ್ಯು ತರ ಖರ್ಗೆ, ಪರಮೇಶ್ವರ್ ಕತ್ತಿ ಮಸೆಯುತ್ತಿದ್ದಾರೆ. ಕತ್ತಿಗೆ ಡಿಕೆಶಿ ಪುಡಿ ಹಾಕುತ್ತಿದ್ದಾರೆ. ಟಿಪ್ಪುವನ್ನು ಪ್ರೀತಿಸುವ ಸಿದ್ದರಾಮಯ್ಯ ಪಾಕಿಸ್ತಾನದಲ್ಲಿ ಹೋಗಿ ಸ್ಪರ್ಧಿಸಲಿ’ ಎಂದರು.
‘ಕರ್ನಾಟಕಕ್ಕೆ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಕೊಡುಗೆ ಏನೆಂದು ಕಾಂಗ್ರೆಸ್ ತಿಳಿಸಲಿ. ಮೋದಿ ಅವಧಿಯಲ್ಲಿ ಎಷ್ಟು ಅನುದಾನ ಬಂದಿದೆ ಎಂಬುದರ ದಾಖಲೆ ನಾವು ನೀಡುತ್ತೇವೆ’ ಎಂದು ಸವಾಲು ಹಾಕಿದರು.