ಅದಕ್ಕೆ ಉತ್ತರಿಸಿದ ಸಚಿವ, ‘ಕಲಾಸಿಪಾಳ್ಯ ಮಾರುಕಟ್ಟೆಯಲ್ಲಿನ ಒತ್ತಡ ಕಡಿಮೆ ಮಾಡಲು ಯಶವಂತಪುರ ಮಾರುಕಟ್ಟೆ ಆರಂಭಿಸಲಾಯಿತು. ಇಲ್ಲಿಗೆ ಪ್ರತಿ ದಿನ 400ರಿಂದ 500 ವಾಹನಗಳು ಬರುತ್ತಿದ್ದವು. ಅದನ್ನು ಕಡಿಮೆ ಮಾಡಲು ದಾಸನಪುರ ಮಾರುಕಟ್ಟೆ ನಿರ್ಮಿಸಲಾಗಿದೆ. ಅಲ್ಲಿ ಎಬಿಸಿಡಿ ಐದು ಅಂಕಗಳಲ್ಲಿ ಮಾರುಕಟ್ಟೆ ನಿರ್ಮಿಸಲಾಗಿದ್ದು, ಆಲೂಗೆಡ್ಡೆ, ಶುಂಠಿ, ಬೆಳ್ಳುಳ್ಳಿ, ಈರುಳ್ಳಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಏಪ್ರಿಲ್ ವೇಳೆಗೆ ದಾಸನಪುರದಲ್ಲಿ ಬಾಕಿ ಇರುವ ಮಳಿಗೆಗಳ ನಿರ್ಮಾಣ ಕಾರ್ಯ ಪೂರ್ಣಗೊಳ್ಳಲಿದೆ. ನಂತರ ಯಶವಂತಪುರ ಮಾರುಕಟ್ಟೆ ಸ್ಥಳಾಂತರವಾಗಲಿದೆ. ಹೈಕೋರ್ಟ್ ಆದೇಶದಂತೆ 2018ರಲ್ಲಿ ಎರಡು ಕಡೆ ವಹಿವಾಟು ನಡೆಸಲು ಅವಕಾಶ ನೀಡಲಾಗಿದೆ’ ಎಂದರು.