ವಿಮಾಕಂತನ್ನು ಕಮ್ಮಗೊಂಡನಹಳ್ಳಿ ಮಾರುತಿ ಸೇವಾ ಸಮಿತಿಯವರೇ ಭರಿಸಿದ್ದು, ವಿಮಾ ಪಾಲಿಸಿ ರದ್ದಾದ ನಂತರ ವಿಮಾ ಕಂತಿನ ಹಣವನ್ನು, ಕಮ್ಮಗೊಂಡನಹಳ್ಳಿ ಮಾರುತಿ ಸೇವಾ ಸಮಿತಿಯವರಿಗೆ ಹಿಂದಿರುಗಿಸಲಾಗಿದೆ ಎಂಬ ಮಾಹಿತಿಯನ್ನು ದಾಖಲೆ ಸಮೇತ ನ್ಯಾಯಪೀಠಕ್ಕೆ ನೀಡಿದರು. ವಾದ ಮಂಡನೆ ಅಪೂರ್ಣಗೊಂಡಿದ್ದು, ವಿಚಾರಣೆಯನ್ನು ಇದೇ 23ಕ್ಕೆ ಮುಂದೂಡಲಾಗಿದೆ.