ರಾಮನಗರ ಜಿಲ್ಲೆಯಲ್ಲಿ ಮಳೆ ಪ್ರಮಾಣ ತಗ್ಗಿದ್ದರೂ, ಅರ್ಕಾವತಿ, ವೃಷಭಾವತಿ ಹಾಗೂ ಕಣ್ವ ನದಿಗಳಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದೆ. ಚನ್ನಪಟ್ಟಣ ತಾಲ್ಲೂಕಿನ ಕಣ್ವ ಜಲಾಶಯ ಭರ್ತಿ ಆಗಿದ್ದು,ಅಬ್ಬೂರು ವ್ಯಾಸರಾಜ ಮಠಕ್ಕೆ ನದಿ ನೀರು ನುಗ್ಗಿದೆ. ಚನ್ನಪಟ್ಟಣ–ಮಾಕಳಿ–ಕುಣಿಗಲ್ ಮಾರ್ಗ ಬಂದ್ ಆಗಿದೆ. ಹರಿಸಂದ್ರ ಕೆರೆ ಕೋಡಿ ನುಗ್ಗಿದ ಪರಿಣಾಮ ತಗಚಗೆರೆ ಗ್ರಾಮದ ಮಧು ಅವರ ಕೋಳಿಫಾರಂನಲ್ಲಿದ್ದ 3ಸಾವಿರಕ್ಕೂ ಹೆಚ್ಚು ಕೋಳಿಸಾವನ್ನಪ್ಪಿವೆ.