ಬೆಂಗಳೂರು: ಗ್ರಾಹಕರ ಖಾತೆಗಳ ಮೂಲಕ ₹ 2.75 ಕೋಟಿ ಅಕ್ರಮ ವಹಿವಾಟು ನಡೆಸಿ ವಂಚಿಸಿರುವ ಆರೋಪದಡಿ ಐಡಿಬಿಐ ಬ್ಯಾಂಕ್ ವ್ಯವಸ್ಥಾಪಕಿ ಸಜಿಲಾ ಗುರುಮೂರ್ತಿ ವಿರುದ್ಧ ಉಪ್ಪಾರಪೇಟೆ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
‘ಬ್ಯಾಂಕ್ನ ಗಾಂಧಿನಗರ ಶಾಖೆಯ ಮುಖ್ಯಸ್ಥ ವೈ.ಎಸ್. ಪ್ರಮೋದ್ಕುಮಾರ್ ವಂಚನೆ ಬಗ್ಗೆ ದೂರು ನೀಡಿದ್ದಾರೆ. ಸಾಜಿಲಾ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ದಾಖಲೆಗಳ ಪರಿಶೀಲನೆ ನಡೆಸಲಾಗುತ್ತಿದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.
‘ಗಾಂಧಿನಗರ ಶಾಖೆಯಲ್ಲಿ ಕೆಲಸ ಮಾಡುತ್ತಿದ್ದ ಸಾಜಿಲಾ, 2022ರ ಮಾ. 23ರಿಂದ ಡಿ. 12ರವರೆಗೆ ಗ್ರಾಹಕರ ಖಾತೆಗಳ ಮೂಲಕ ಅಕ್ರಮ ವಹಿವಾಟು ನಡೆಸಿದ್ದಾರೆ. ಇತ್ತೀಚೆಗೆ ಲೆಕ್ಕ ಪರಿಶೋಧನೆ ನಡೆಸಿದಾಗ, ಕೃತ್ಯ ಪತ್ತೆಯಾಗಿದೆ. ದೂರುದಾರ ಲೆಕ್ಕದ ವರದಿಯನ್ನೂ ನೀಡಿದ್ದಾರೆ’ ಎಂದು ತಿಳಿಸಿವೆ.