ಶೀಘ್ರ ಬೆಳ್ಳಿರಥ ಸಮರ್ಪಣೆ: ‘ಮೂರನೇ ಬಾರಿಗೆ ಮೇಲುಕೋಟೆ ಕ್ಷೇತ್ರಕ್ಕೆ ಬರುತ್ತಿದ್ದೇನೆ. ಚೆಲುವನಾರಾಯಣಸ್ವಾಮಿಯ ದರ್ಶನ ಭಾಗ್ಯದಿಂದ ನನಗೆ ಅಧಿಕಾರ ಲಭಿಸಿದೆ. ಅಧಿಕಾರ ಬಲದಿಂದಾಗಿ ಬಡವರಿಗೆ, ನೊಂದವರಿಗೆ ಸಹಾಯ ಮಾಡಲು ಭಗವಂತ ಶಕ್ತಿ ನೀಡಿದ್ದಾನೆ. ಇಲ್ಲಿಯ ಸ್ಥಾನೀಕರ ಮನವಿಯಂತೆ ಸ್ವಾಮಿಗೆ ಸಮರಭೂಪಾಲ ಬೆಳ್ಳಿಯ ರಥ ಮಾಡಿಸುತ್ತೇನೆ. ನಾನೇ ಬಂದು ದೇವರಿಗೆ ರಥ ಸಮರ್ಪಿಸುತ್ತೇನೆ’ ಎಂದು ವಾಗ್ಧಾನ ಮಾಡಿದರು.