'ಕನಿಷ್ಠ ಬೆಂಬಲ ಬೆಲೆಯ ಹಿಸಾಬ್ (ಲೆಕ್ಕ) ಕೇಳಿದರೆ ಹಿಜಾಬ್ ತೋರಿಸಿ ನಿಜವಾದ ವಿಚಾರಗಳನ್ನು ಕೇಂದ್ರ ಸರ್ಕಾರ ಮರೆಮಾಚುತ್ತಿದೆ. ರಾಮನವಮಿ ದಿನವೇ ರಾಮನ ಹೆಸರಿನಲ್ಲಿ ದೇಶದ ವಿವಿಧೆಡೆ ಮುಸ್ಲಿಮರು ಹಾಗೂ ಮಸೀದಿಗಳ ಮೇಲೆ ದಾಳಿ ನಡೆಸಲಾಗಿದೆ. ಮುಸ್ಲಿಂ ವ್ಯಾಪಾರಿಗಳಿಗೆ ತೊಂದರೆ ಕೊಡುತ್ತಿದ್ದಾರೆ. ಜೆಎನ್ಯುನಲ್ಲಿ ವಿದ್ಯಾರ್ಥಿಗಳು ಮಾಂಸಾಹಾರ ಸೇವಿಸಬಾರದು ಎನ್ನುತ್ತಿದ್ದಾರೆ. ರೈತರ, ಜನಸಾಮಾನ್ಯರ ಸಮಸ್ಯೆಗಳನ್ನು ಮುಚ್ಚಿಹಾಕಲು ಪ್ರಯತ್ನ ನಡೆಸಿದ್ದಾರೆ' ಎಂದು ಆರೋಪಿಸಿದರು.