‘ತ್ರಿಭಾಷಾ ಸೂತ್ರ ಕೇಂದ್ರ ಸರ್ಕಾರದ ಕಚೇರಿಗಳಿಗೆ ಅನ್ವಯವಾಗದು ಎಂಬ ಕೇಂದ್ರದ ಧೋರಣೆ ಬಗ್ಗೆ ವಿಧಾನಮಂಡಲದ ಅಧಿವೇಶನದಲ್ಲಿ ಚರ್ಚೆ ನಡೆಸಬೇಕು. ರಾಜ್ಯವು ಇನ್ನು ಕೂಡಾ ತ್ರಿಭಾಷಾ ಸೂತ್ರಕ್ಕೆ ಅಂಟಿಕೊಳ್ಳಬೇಕೇ ಎಂಬ ಬಗ್ಗೆ ಪುನರವಲೋಕನ ನಡೆಸಬೇಕು. ಅಗತ್ಯಬಿದ್ದರೆ ತಮಿಳುನಾಡಿನ ರೀತಿ ನೆಲದ ಭಾಷೆ ಮತ್ತು ಇಂಗ್ಲಿಷ್ ಮಾತ್ರ ಬಳಸುವ ಬಗ್ಗೆ ಉಭಯ ಸದನಗಳಲ್ಲಿ ಒಕ್ಕೊರಲಿನ ತೀರ್ಮಾನ ಕೈಗೊಳ್ಳಬೇಕು’ ಎಂದು ಅವರು ಒತ್ತಾಯಿಸಿದ್ದಾರೆ.