ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರೆ ಸ್ವೀಕರಿಸದಿದ್ದಕ್ಕೆ ಮಹಿಳೆ ಕೊಂದು ಆತ್ಮಹತ್ಯೆ

Last Updated 18 ಫೆಬ್ರುವರಿ 2021, 20:53 IST
ಅಕ್ಷರ ಗಾತ್ರ

ಬೆಂಗಳೂರು: ಮೊಬೈಲ್ ಕರೆ ಸ್ವೀಕರಿಸಲಿಲ್ಲವೆಂಬ ಕಾರಣಕ್ಕೆ ಸ್ನೇಹಿತೆ ರಮ್ಯಾ (35) ಅವರನ್ನು ಕೊಲೆ ಮಾಡಿರುವ ಆರೋಪಿ ಚಿಕ್ಕಮೊಗ (45), ಕೃತ್ಯದ ಬಳಿಕ ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೋಣನಗುಂಟೆ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

‘ಮೃತ ರಮ್ಯಾ, ಗಾರ್ಮೆಂಟ್ಸ್ ಕಾರ್ಖಾನೆಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಆರೋಪಿ ಚಿಕ್ಕಮೊಗ, ಭದ್ರತಾ ಸಿಬ್ಬಂದಿ’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ಪತಿ ತೊರೆದಿದ್ದ ರಮ್ಯಾ, ಚಿಕ್ಕಮೊಗ ಜೊತೆ ಒಂದೇ ಮನೆಯಲ್ಲಿ ವಾಸವಿದ್ದರು. ಆರೋಪಿಗೂ ಮದುವೆಯಾಗಿತ್ತು. ಆತನೂ ಪತ್ನಿ ತೊರೆದಿದ್ದ’ ಎಂದೂ ಮೂಲಗಳು ತಿಳಿಸಿವೆ.

‘ರಮ್ಯಾ ಅವರ ಮೊಬೈಲ್‌ಗೆ ಚಿಕ್ಕಮೊಗ ಕರೆ ಮಾಡಿದ್ದರು. ಅದನ್ನು ಸ್ವೀಕರಿಸಿರಲಿಲ್ಲ. ಅದೇ ಸಿಟ್ಟಿನಲ್ಲೇ ಮನೆಗೆ ಬಂದಿದ್ದ ಆರೋಪಿ, ಜಗಳ ತೆಗೆದಿದ್ದ. ಅಕ್ಕ–ಪಕ್ಕದ ನಿವಾಸಿಗಳು, ವಿಚಾರಿಸಲು ಬಂದಾಗ ಅವರಿಗೆ ಬೈದು ಮನೆಯಿಂದ ವಾಪಸು ಕಳುಹಿಸಿದ್ದ. ನಂತರ ಮಾರಕಾಸ್ತ್ರದಿಂದ ಹೊಡೆದು ರಮ್ಯಾ ಅವರನ್ನು ಕೊಂದಿದ್ದ. ಬಳಿಕ, ತಾನೂ ಮನೆಯಲ್ಲೇ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ’ ಎಂದೂ ಪೊಲೀಸ್ ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT