ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಲೆ, ದರೋಡೆ, ವೇಶ್ಯಾವಾಟಿಕೆ ಪ್ರಕರಣ: ರೌಡಿಶೀಟರ್‌ ‘ಒಂಟಿ ಕೈ ವೆಂಕಟೇಶ’ ಬಂಧನ

Last Updated 11 ಜನವರಿ 2022, 4:33 IST
ಅಕ್ಷರ ಗಾತ್ರ

ಬೆಂಗಳೂರು: ಸಿದ್ದಾಪುರ ಠಾಣೆಯ ರೌಡಿಶೀಟರ್‌ ವೆಂಕಟೇಶ್‌ (28) ಯಾನೆ ‘ಒಂಟಿ ಕೈ ವೆಂಕಟೇಶ’ನನ್ನು ಪೊಲೀಸರು ಗೂಂಡಾ ಕಾಯ್ದೆ ಅಡಿಯಲ್ಲಿ ಸೋಮವಾರ ಬಂಧಿಸಿದ್ದಾರೆ.

‘ಕೋರಮಂಗಲ 5ನೇ ಹಂತದ ಕೊಳೆಗೇರಿಯಲ್ಲಿ ವಾಸವಿದ್ದ ಈತನ ವಿರುದ್ಧ ಸಿದ್ದಾಪುರ ಸೇರಿದಂತೆ ನಗರದ ವಿವಿಧ ಠಾಣೆಗಳಲ್ಲಿ ಪ್ರಕರಣ ದಾಖಲಾಗಿತ್ತು. ಆರೋಪಿಯು ಕೊಲೆ, ದರೋಡೆ, ಮಾದಕ ವಸ್ತು ಮಾರಾಟ, ವೇಶ್ಯಾವಾಟಿಕೆ, ಕೊಳಚೆ ಪ್ರದೇಶ ಅತಿಕ್ರಮಣ, ಆಡಿಯೊ ಹಾಗೂ ವಿಡಿಯೊ ಕೃತಿಚೌರ್ಯ ಸೇರಿದಂತೆ ವಿವಿಧ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದ’ ಎಂದು ಪೊಲೀಸರು ಹೇಳಿದ್ದಾರೆ.

‘ಆರೋಪಿಯ ವಿರುದ್ಧ ಸಿದ್ದಾಪುರ ಪೊಲೀಸ್ ಠಾಣೆಯಲ್ಲೇ 10 ಪ್ರಕರಣಗಳು ದಾಖಲಾಗಿದ್ದವು. ಈತ ಅಪ್ಪು, ಮಂಜುನಾಥ ಯಾನೆ ದೊಣ್ಣೆ ಮಂಜ, ಶಂಕರ ಸೇರಿದಂತೆ ಇತರ ರೌಡಿಗಳ ಜೊತೆ ಸೇರಿ ಹಲವು ಅಪರಾಧ ಚಟುವಟಿಕೆಗಳನ್ನು ನಡೆಸಿದ್ದ. ವಿಚಾರಣೆಗಾಗಿ ನ್ಯಾಯಾಲಯಕ್ಕೂ ಹಾಜರಾಗದೆ ತಲೆಮರೆಸಿಕೊಂಡಿದ್ದ. ಸಾಕ್ಷಿಗಳನ್ನು ಬೆದರಿಸುತ್ತಿದ್ದ ಬಗ್ಗೆಯೂ ದೂರುಗಳು ಬಂದಿದ್ದವು’ ಎಂದು ವಿವರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT