ಸೋಮವಾರ ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ‘ಪ್ರಕರಣ ಏಕೆ ತಡವಾಗಿ ಬೆಳಕಿಗೆ ಬಂತು? ಘಟನೆ ನಡೆದಾಗ ಡಿವೈಎಸ್ಪಿ ಯಾರಿದ್ದರು, ಅಧಿಕಾರಿಗಳು ಯಾರಿದ್ದರು? ಮಠದಲ್ಲಿನ ಅಧಿಕಾರಿಗಳು ಏಕೆ ಇಷ್ಟು ವರ್ಷ ಮುಚ್ಚಿಟ್ಟಿದ್ದರು? ಪೊಲೀಸರು ಏಕೆ ವಿಫಲರಾದರು, ಕ್ರಮ ವಹಿಸಲು ಉಂಟಾದ ಅಡೆತಡೆ ಏನು ಎಂಬಿತ್ಯಾದಿ ಅಂಶಗಳ ಬಗ್ಗೆ ಮಾಹಿತಿ ಕಲೆಹಾಕುತ್ತಿದ್ದು, ಈಗಾಗಲೇ ಹಲವರ ಮೇಲೆ ಕ್ರಮವೂ ಆಗಿದೆ’ ಎಂದರು.