ಅರಮನೆ, ಕಲಾಮಂದಿರ ಹಾಗೂ ನಂಜನಗೂಡಿನ ಶ್ರೀಕಂಠೇಶ್ವರ ಗುಡಿಯಲ್ಲಷ್ಟೇ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ರಾಜವಂಶಸ್ಥರ ಖಾಸಗಿ ದರ್ಬಾರ್ ವೀಕ್ಷಿಸಲು ಈ ಬಾರಿ ಸಂಬಂಧಿಕರು ಮತ್ತು ಮಾಧ್ಯಮದವರಿಗೂ ಅವಕಾಶವಿಲ್ಲ. ಜನಪ್ರಿಯವಾದ ರೈತ ದಸರಾ, ಯುವ ದಸರಾ, ವಜ್ರಮುಷ್ಟಿ ಕಾಳಗ, ಕ್ರೀಡಾಕೂಟ, ಕುಸ್ತಿ ಪಂದ್ಯಾವಳಿ, ಪಂಜಿನ ಕವಾಯತನ್ನು ಪಕ್ಕಕ್ಕೆ ಸರಿಸಲಾಗಿದೆ.