ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರದಿಂದ ಕಾಟಾಚಾರದ ದಸರಾ ಆಚರಣೆ: ಕಾಂಗ್ರೆಸ್‌ ವಾಗ್ದಾಳಿ

Last Updated 28 ಸೆಪ್ಟೆಂಬರ್ 2022, 10:22 IST
ಅಕ್ಷರ ಗಾತ್ರ

ಬೆಂಗಳೂರು: ಮೈಸೂರು ದಸರಾ ಕವಿಗೋಷ್ಠಿಯಲ್ಲಿ ಆಗಿರುವ ಎಡವಟ್ಟುಗಳ ವಿಚಾರವಾಗಿ ರಾಜ್ಯ ಸರ್ಕಾರವನ್ನು ಕಾಂಗ್ರೆಸ್‌ ತರಾಟೆಗೆ ತೆಗೆದುಕೊಂಡಿದೆ.

ಈ ಕುರಿತು ‘ಪ್ರಜಾವಾಣಿ’ ವರದಿಯನ್ನು ಟ್ವೀಟ್‌ ಮಾಡಿರುವ ಕೆಪಿಸಿಸಿ, ‘ಬಿಜೆಪಿ ಸರ್ಕಾರಕ್ಕೆ ಭ್ರಷ್ಟಾಚಾರ ಒಂದನ್ನು ಬಿಟ್ಟು ಬೇರೆ ಯಾವುದನ್ನೂ ಮಾಡಲು ಬರುವುದಿಲ್ಲ’ ಎಂದು ಹರಿಹಾಯ್ದಿದೆ.

‘ದಸರಾ ಕವಿಗೋಷ್ಠಿಯಲ್ಲಿ ಸತ್ತವರ ಹೆಸರನ್ನು ಸೇರಿಸಲಾಗಿದೆ. ಸಮ್ಮತಿ ಪಡೆಯದೆ ಹೆಸರನ್ನು ಸೇರಿಸಲಾಗಿದೆ’ ಎಂದು ಟ್ವೀಟಿಸಿದೆ.

‘ಅತ್ತ ಕ್ರೀಡಾಕೂಟಕ್ಕೂ ಅನುದಾನವಿಲ್ಲ, ಇತ್ತ ಕವಿಗೋಷ್ಠಿಯೂ ಸರಿ ಇಲ್ಲ. ಸರ್ಕಾರ ಕಾಟಾಚಾರದ ದಸರಾ ಆಚರಣೆ ಮಾಡುತ್ತಿರುವುದು ಸ್ಪಷ್ಟ’ ಎಂದು ಕೆಪಿಸಿಸಿ ಟೀಕಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT