ಚಿತ್ರದುರ್ಗ ಜಿಲ್ಲೆಯ ದೊಡ್ಡಸಿದ್ದವನಹಳ್ಳಿಯ ಅವರು ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಆರ್.ವಿ.ಎಂಜಿನಿಯರಿಂಗ್ ಕಾಲೇಜಿಲ್ಲಿ ಬಿ.ಇ (ಸಿವಿಲ್) ಪೂರೈಸಿದ್ದಾರೆ. ‘ಪರೀಕ್ಷೆಗೆ ಸಜ್ಜಾಗುವಾಗ ಅಮ್ಮ ತನುಜಾ ಕೈತುತ್ತು ನೀಡುತ್ತಿದ್ದರು. ನನಗೆ ಒಲಿದಿರುವ ಪದಕಗಳನ್ನು ತಂದೆ, ತಾಯಿ ಹಾಗೂ ಶಿಕ್ಷಕರಿಗೆ ಅರ್ಪಿಸುತ್ತೇನೆ’ ಎಂದರು.