‘ಸಿ. ಅಶ್ವಥ್ ಹಾಗೂ ಅನಂತಸ್ವಾಮಿ ಇಬ್ಬರಿಗೂ ಗೌರವ ಸಲ್ಲಿಸುವ ಸಲುವಾಗಿ ಹಾಡುವ ಅವಧಿಯನ್ನು ಕಡ್ಡಾಯಗೊಳಿಸಿ, ಈ ಇಬ್ಬರ ಧಾಟಿಯನ್ನೂ ಪರಿಗಣಿಸಬಹುದು. ಧಾಟಿಗೆ ಸಂಬಂಧಿಸಿದಂತೆ ತರಾತುರಿಯಲ್ಲಿ ನಿರ್ಧಾರ ಕೈಗೊಳ್ಳಬಾರದು. ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಸಿ. ಅಶ್ವಥ್ ಅವರ ಧಾಟಿ ಅತ್ಯಂತ ಜನಪ್ರಿಯವಾಗಿದೆ. ಹಾಗಾಗಿ, ಅದನ್ನೂ ಪರಿಗಣಿಸಬೇಕು’ ಎಂದು ಒತ್ತಾಯಿಸಿದ್ದಾರೆ.