ಸಿದ್ದರಾಮಯ್ಯ ಅವರ ಅಧಿಕೃತ ನಿವಾಸದಲ್ಲಿ ಶುಕ್ರವಾರ ಅವರನ್ನು ಭೇಟಿ ಮಾಡಿದ ನಲಪಾಡ್ ನೇತೃತ್ವದ ತಂಡ, ‘ಕೊರೊನಾ ಸೋಂಕು ಹರಡು
ತ್ತಿರುವ ಸಂದರ್ಭದಲ್ಲಿ ಯುವ ಕಾಂಗ್ರೆಸ್ ಸದಸ್ಯತ್ವ ನೋಂದಣಿ ಕಷ್ಟವಾಗುತ್ತದೆ. ಚುನಾವಣಾ ಪ್ರಕ್ರಿಯೆ ನಡೆಸುವುದಕ್ಕೂ ಸಾಕಷ್ಟು ತಯಾರಿ ಅಗತ್ಯ. ಈ ಎಲ್ಲವನ್ನೂ ಪರಿಗಣಿಸಿ ಈ ಬಾರಿ ಚುನಾವಣೆ ಕೈಬಿಡಬೇಕು. ಪದಾಧಿಕಾರಿಗಳನ್ನು ಅವಿರೋಧವಾಗಿ ಆಯ್ಕೆ ಮಾಡಬೇಕು’ ಎಂದು ಆಗ್ರಹಿಸಿತು.