‘ಕೇಂದ್ರ ಸಚಿವ ಭಗವಂತ ಖೂಬಾ ಅವರು ಜನಾಶೀರ್ವಾದ ಯಾತ್ರೆಯಲ್ಲಿ ಅಲ್ಲಿಗೆ ಹೋದಾಗ ಅವರ ಅಭಿಮಾನಿಗಳು ಸಿಡಿಮದ್ದು ಸಿಡಿಸಿದ್ದಾರೆ. ಆದರೆ, ಬಂದೂಕಿನಲ್ಲಿ ಗುಂಡು ಇರಲಿಲ್ಲ. ಶುಭ ಸಮಾರಂಭ ನಡೆದಾಗ ಅಥವಾ ಯಾರಾದರೂ ಮೃತಪಟ್ಟಾಗ ಈ ರೀತಿ ಮದ್ದು ಸಿಡಿಸುವ ಪದ್ಧತಿ ಕೊಡಗು ಜಿಲ್ಲೆಯಲ್ಲೂ ಇದೆ. ಅದೇ ರೀತಿಯ ಖುಷಿಯನ್ನು ಇಲ್ಲಿ ವ್ಯಕ್ತಪಡಿಸಲಾಗಿದೆ’ ಎಂದು ಅವರು ನಗರದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.