‘ಜಿಲ್ಲಾಡಳಿತವೇ ಮತ್ತೆ ವಿವಾದ ಸೃಷ್ಟಿಸಬಾರದು. ವಿವಾದ ಶಾಶ್ವತವಾಗಿ ಉಳಿಯುವಂತೆಯೂ ಮಾಡಬಾರದು. ಆಯಾ ಪ್ರತಿಮೆಗಳ ಹೆಸರನ್ನೇ ವೃತ್ತಕ್ಕೆ ಇಡಬೇಕು. ಎಂಇಎಸ್ (ಮಹಾರಾಷ್ಟ್ರ ಏಕೀಕರಣ ಸಮಿತಿ) ಅಥವಾ ಶಿವಸೇನೆಯವರ ಮಾತಿಗೆ ಮನ್ನಣೆ ಕೊಡಬಾರದು’ ಎಂದು ಒತ್ತಾಯಿಸಿದರು. ‘ಈ ಬಗ್ಗೆ ಮುಖ್ಯಮಂತ್ರಿಗೂ ಪತ್ರ ಬರೆಯುತ್ತೇನೆ. ಸ್ಪಂದನೆ ಸಿಗದಿದ್ದಲ್ಲಿ ಮುಂದೇನು ಮಾಡಬೇಕು ಎನ್ನುವುದು ಗೊತ್ತಿದೆ’ ಎಂದರು.