‘ಬೆಳಿಗ್ಗೆ 5ರಿಂದ 6 ಗಂಟೆ ಮತ್ತು ರಾತ್ರಿ 10ರಿಂದ 11 ಗಂಟೆ ತನಕ ಪ್ರತಿ ರೈಲಿನ ಸಂಚಾರದ ನಡುವೆ ಇದ್ದ 20 ನಿಮಿಷಗಳ ಅಂತರವನ್ನು 15 ನಿಮಿಷಕ್ಕೆ ಇಳಿಸಲಾಗಿದ್ದು, ಆ.8ರಿಂದ ವೇಳಾಪಟ್ಟಿ ಬದಲಾಗಿದೆ. ಬೈಯಪ್ಪನಹಳ್ಳಿ ಮಾರ್ಗದ ನಿಲ್ದಾಣಗಳಲ್ಲಿ 15 ನಿಮಿಷ ಕಾದು ರೈಲು ಹತ್ತಿದವರು ನಾಡಪ್ರಭು ಕೆಂಪೇಗೌಡ ಮೆಟ್ರೊ ನಿಲ್ದಾಣದಲ್ಲಿ ಇಳಿದು ನಾಗಸಂದ್ರ ಮಾರ್ಗದ ರೈಲು ಹತ್ತಬೇಕೆಂದರೆ 14 ಅಥವಾ 15 ನಿಮಿಷ ಕಾಯಬೇಕಾಗುತ್ತಿದೆ.