ಒಕ್ಕಲಿಗರ ಮೀಸಲಾತಿಗೆ ಒತ್ತಾಯಿಸಿ ಪಟ್ಟಣದಲ್ಲಿ ಶುಕ್ರವಾರ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು ‘ಒಕ್ಕಲಿಗರಿಗೆ ರಾಮ–ಕೃಷ್ಣರಂತೆ ಬದುಕುವುದೂ ಗೊತ್ತು, ಉಗ್ರ ನರಸಿಂಹನ ಅವತಾರ ತಾಳುವುದೂ ಗೊತ್ತು. ಬೇರೆ ಸಮುದಾಯಗಳಿಗೆ ಮೀಸಲಾತಿ ನೀಡುವುದು ಸ್ವಾಗತಾರ್ಹ, ಆದರೆ ಒಕ್ಕಲಿಗರಿಗೂ ಮೀಸಲಾತಿಯಲ್ಲಿ ಪಾಲು ಸಿಗಬೇಕು’ ಎಂದರು.