ಈ ಕುರಿತು ಶನಿವಾರ ಸರಣಿ ಟ್ವೀಟ್ ಮಾಡಿರುವ ಅವರು, ‘ಸ್ತ್ರೀ ಸಮಾನತೆಯನ್ನು ಪ್ರತಿಪಾದಿಸಿದ ಮತ್ತು ಮನುಷ್ಯರೆಲ್ಲ ಒಂದೇ, ಒಂದೇ ಜಾತಿ, ಒಂದೇ ಮತ ಮತ್ತು ಒಬ್ಬನೇ ದೇವರು ಎಂಬ ಸಂದೇಶದೊಂದಿಗೆ ಅರಿವಿನ ಬೆಳಕು ಮೂಡಿಸಿದವರು ನಾರಾಯಣ ಗುರುಗಳು. ಅವರ ಚಿತ್ರವಿದ್ದ ಸ್ತಬ್ಧಚಿತ್ರವನ್ನು ತಿರಸ್ಕರಿಸಿರುವುದು ಕ್ಷಮಾರ್ಹವಲ್ಲದ ತಪ್ಪು’ ಎಂದಿದ್ದಾರೆ.