‘ದೇಶದಲ್ಲಿ ಶ್ರೀಮಂತರನ್ನಷ್ಟೇ ಉಳಿಸಿಕೊಂಡು ಭಾರತವನ್ನು ವಿಶ್ವಗುರು ಮಾಡಲು ಬಿಜೆಪಿ ಹೊರಟಿರುವಂತಿದೆ. ಹೀಗಾಗಿಯೇ ಬಡ ಮತ್ತು ಮಧ್ಯಮ ವರ್ಗದ ಜನರಿಗೆ ಬೆಲೆ ಏರಿಕೆಯ ಬಿಸಿ ಮುಟ್ಟಿಸುತ್ತಿದೆ. ಹಿಂದಿನ ಒಂದು ವರ್ಷದಲ್ಲಿ ಸಿಲಿಂಡರ್ ಒಂದರ ಬೆಲೆಯನ್ನು ಒಟ್ಟು ₹265ರಷ್ಟು ಏರಿಸಲಾಗಿದೆ. ಕೋವಿಡ್ ಹಾಗೂ ಲಾಕ್ಡೌನ್ನಿಂದ ಕಂಗೆಟ್ಟಿದ್ದ ಜನ, ಸರ್ಕಾರದ ಈ ಕ್ರಮದಿಂದ ದಿಕ್ಕುತೋಚದಾಗಿದ್ದಾರೆ’ ಎಂದರು.