‘ಅಗತ್ಯವಿರುವವರಿಗೆ ತರಬೇತಿ ನೀಡಬೇಕು ಎಂಬುದಷ್ಟೇ ನಮ್ಮ ಉದ್ದೇಶ. ಆಸಕ್ತರಿದ್ದರೆ ಬೇರೆ ಕಾಲೇಜಿನ ವಿದ್ಯಾರ್ಥಿಗಳೂ ತರಬೇತಿಗೆ ಹಾಜರಾಗಬಹುದು. ಮುಂದಿನ ದಿನಗಳಲ್ಲಿ ಸಂಪನ್ಮೂಲ ವ್ಯಕ್ತಿಗಳನ್ನು ಆಹ್ವಾನಿಸಿ, ಮಾರ್ಗದರ್ಶನ ನೀಡುವ ಯೋಜನೆ ಹಾಕಿಕೊಂಡಿದ್ದೇವೆ. ಶೈಕ್ಷಣಿಕ ವರ್ಷವಿಡೀ ಈ ತರಗತಿ ನಡೆಯುತ್ತದೆ’ ಎನ್ನುತ್ತಾರೆ ಉಪನ್ಯಾಸಕರಾದ ಎನ್.ಬಿ.ಮರೆಣ್ಣವರ, ಡಾ.ಎಸ್.ಎಸ್.ಪಾಟೀಲ ಹಾಗೂ ಎಸ್.ಎಸ್.ಚುಳೇಕರ್.