ರಾಯಚೂರು: ವೀರಶೈವ ಪಂಚಪೀಠಗಳಲ್ಲಿ ಒಂದಾದ ಕಾಶಿ ಪೀಠಕ್ಕೆ ದೇವದುರ್ಗ ತಾಲ್ಲೂಕು ಜಾಲಹಳ್ಳಿ ಗ್ರಾಮದ ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಅವರನ್ನು ಜಗದ್ಗುರುವಾಗಿ ನೇಮಿಸಲಾಗಿದೆ.
ಶುಕ್ರವಾರ (ಮೇ 13) ಕಾಶಿ ಸಮೀಪದ ಜಂಗಮವಾಡಿಯಲ್ಲಿ ಪಟ್ಟಾಭಿಷೇಕ ಸಮಾರಂಭ ನಡೆಯಲಿದೆ.
ಈವರೆಗೆಅವರು ಸೊಲ್ಲಾಪುರದ ಹೊಟಗಿ ಬೃಹನ್ಮಠದ ಪೀಠಾಧಿಕಾರಿಯಾಗಿದ್ದರು. ಹಾಲಿ ಕಾಶಿ ಜಗದ್ಗುರು ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಅವರು ಆರು ತಿಂಗಳ ಹಿಂದೆಯೇ ಇವರ ಹೆಸರು ಘೋಷಿಸಿದ್ದರು.