‘ಕೆಲವು ವಿಷಯಗಳಲ್ಲಿ ದೊಡ್ಡ ದನಿಯಲ್ಲಿ ಮಾತನಾಡುವ ಕಾಂಗ್ರೆಸ್, ಶಿಕ್ಷಣ ಮತ್ತು ಸಂಸ್ಕೃತಿಗೆ ಸಂಬಂಧಿಸಿದ ವಿಷಯದಲ್ಲಿ ‘ಪಕ್ಷ ಪರಂಪರೆ’ಗೆ ಅನುಗುಣವಾಗಿ ಉಪೇಕ್ಷೆ ತೋರುತ್ತಿದೆಯೆಂದು ವಿಷಾದದಿಂದ ಹೇಳಬೇಕಾಗಿದೆ. ಈ ವಿಷಯದಲ್ಲಿ ಎಡಪಕ್ಷಗಳು ಮಾತ್ರ ಸೈದ್ಧಾಂತಿಕವಾಗಿ ಸ್ಪಷ್ಟ ನಿಲುವು ವ್ಯಕ್ತಪಡಿಸುತ್ತಾ ಬಂದಿವೆ. ಇನ್ನಾದರೂ ಕಾಂಗ್ರೆಸ್ ಈ ವಿಷಯಗಳಿಗೆ ಆದ್ಯತೆ ನೀಡುವುದನ್ನು ಅಭ್ಯಾಸ ಮಾಡಿಕೊಳ್ಳಬೇಕು. ನೀತಿಯನ್ನು ಒಪ್ಪುವುದು ಅಥವಾ ಪೂರ್ಣವಾಗಿ ಒಪ್ಪದೇ ಇರುವುದು ಅಥವಾ ಕೆಲವನ್ನು ಒಪ್ಪಿ, ಕೆಲವನ್ನು ಮರುಪರಿಶೀಲನೆಗೆ ಒತ್ತಾಯಿಸುವುದು ಹೀಗೆ ಯಾವುದಾದರೂ ನಿಲುವಿಗೆ ಬರಬೇಕು’ ಎಂದೂ ಪತ್ರದಲ್ಲಿ ಬರಗೂರುಒತ್ತಾಯಿಸಿದ್ದಾರೆ.