ಬೆಂಗಳೂರು– ಮೈಸೂರು ಇನ್ಫ್ರಾಸ್ಟ್ರಕ್ಚರ್ ಕಾರಿಡಾರ್ ಪ್ರದೇಶದ ಯೋಜನಾ ಪ್ರಾಧಿಕಾರದ (ಬಿಎಂಐಸಿಎಪಿಎ) ಅಧ್ಯಕ್ಷರಾಗಿ ಎಂ. ಜಯದೇವ್, ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ (ಬಿಎಂಟಿಸಿ) ನಿರ್ದೇಶಕ ಮಂಡಳಿಯ ಉಪಾಧ್ಯಕ್ಷರಾಗಿ ಕೋಲಾರದ ಎಂ.ಆರ್. ವೆಂಕಟೇಶ್, ಬೀದರ್ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ಬೀದರ್ನ ಬಾಬು ವಾಲಿ (ನಿಂಗಪ್ಪಾ) ಅವರನ್ನು ನೇಮಿಸಲಾಗಿದೆ. ಚನ್ನರಾಯಪಟ್ಟಣ ನಗರ ಯೋಜನಾ ಪ್ರಾಧಿಕಾರಕ್ಕೆ ಅಧ್ಯಕ್ಷರಾಗಿ ಶಿವನಂಜೇಗೌಡ, ಸದಸ್ಯರಾಗಿ ಅದೇ ತಾಲ್ಲೂಕಿನವರಾದ ನಿತಿನ್, ನಾಗರಾಜು, ಹರ್ಷವರ್ಧನ್ ಎಂಬುವರನ್ನು ನೇಮಿಸಲಾಗಿದೆ.