ರಾಮನಗರದ ಜಾನಪದ ಲೋಕ ಸೇರಿದಂತೆ ವಿವಿಧ ಸಂಸ್ಥೆಗಳಿಗೆ ಸರ್ಕಾರ ವಾರ್ಷಿಕ ಅನುದಾನ ನೀಡುತ್ತ ಬಂದಿದೆ. ಈ ಅನುದಾನದಲ್ಲಿಯೇ ಅಲ್ಲಿನ ಸಿಬ್ಬಂದಿಗೆ ಸಂಬಳ ಪಾವತಿಸಲಾಗುತ್ತಿದೆ. ಆದರೆ ಈ ಹಣಕಾಸು ವರ್ಷದಿಂದ ಎಚ್ಆರ್ಎಂಎಸ್ ಅಡಿ ಬರುವ ಅನುದಾನಿತ ಸಿಬ್ಬಂದಿಗೆ ಮಾತ್ರವೇ ಸಂಬಳ ನೀಡುವುದಾಗಿ ಸರ್ಕಾರ ಹೇಳಿದ್ದು, ವಾರ್ಷಿಕ ಅನುದಾನವನ್ನು ಕಡಿತ ಮಾಡಿದೆ. ಮತ್ತೊಂದೆಡೆ, ಖಾಲಿ ಇರುವ ಹುದ್ದೆಗಳ ಭರ್ತಿಗೆ ಮನಸ್ಸು ಮಾಡಿಲ್ಲ. ಅನುದಾನ ಕೇಳಿದರೆ ಆರ್ಥಿಕ ಸ್ವಾವಲಂಬನೆಯ ಪಾಠ ಹೇಳುತ್ತಿದೆ. ಕರ್ನಾಟಕ ವಿದ್ಯಾವರ್ಧಕ ಸಂಘ, ನೀನಾಸಂ ಮೊದಲಾದ ಸಂಸ್ಥೆಗಳಲ್ಲೂ ಇದೇ ಪರಿಸ್ಥಿತಿ ಇದೆ ಎನ್ನಲಾಗಿದೆ.