ಬೆಂಗಳೂರಿನಿಂದ ಸೇಲಂಗೆ ಕನಕಪುರ, ಮಳವಳ್ಳಿ, ಯಳಂದೂರು, ಕೊಳ್ಳೇಗಾಲ, ಸತ್ತೇಗಾಲ ಮಾರ್ಗವಾಗಿ ಹೊಸ ಹೆದ್ದಾರಿ ನಿರ್ಮಾಣ ಮಾಡಬೇಕು. ಈ ಮಾರ್ಗದಲ್ಲಿ ಸೇಲಂಗೆ 60 ಕಿ.ಮೀ. ಕಡಿಮೆ ಆಗುತ್ತದೆ. ಇಲ್ಲಿ 9 ಕಿ.ಮೀ ಅರಣ್ಯ ಬರುತ್ತದೆ. ಸುಮಾರು 5 ಕಿ.ಮೀ ಸುರಂಗದ ಮಾರ್ಗ ನಿರ್ಮಿಸಿದರೆ, ಅರಣ್ಯವೂ ಹಾಗೆ ಉಳಿಯುತ್ತದೆ. ಈ ಸಂಬಂಧ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಸೋಮಣ್ಣ ತಿಳಿಸಿದರು.