ಜಾನಪದ ವಿದ್ವಾಂಸಗೊ.ರು. ಚನ್ನಬಸಪ್ಪ, ‘ಎರಡು ಸಾವಿರ ವರ್ಷಗಳ ಪರಂಪರೆ ಇರುವ ಕನ್ನಡ ಭಾಷೆಯ ಮೇಲೆ 400 ವರ್ಷಗಳ ಹಿಂದೆ ಬಂದ ಆಂಗ್ಲ ಭಾಷೆ ಸವಾರಿ ಮಾಡುತ್ತಿದೆ. ಈಗ ಹಿಂದಿ ಹೇರಿಕೆ ಪ್ರಾರಂಭವಾಗಿದೆ. ಇದು ಆಘಾತಕಾರಿ ಬೆಳವಣಿಗೆ. ಕನ್ನಡದೊಂದಿಗೆ ಬೇರೆ ಭಾಷೆಗಳನ್ನು ಮಿಶ್ರಗೊಳಿಸಿ, ಭಾಷೆಯನ್ನು ವಿಕೃತಗೊಳಿಸಬಾರದು. ಭಾಷೆ ಉಳಿಸಿ, ಬೆಳೆಸುವುದು ಸರ್ಕಾರದ ಕರ್ತವ್ಯ ಆಗಬೇಕು. ಮಾತೃಭಾಷೆಯ ವಿಚಾರವಾಗಿ ಕನ್ನಡಿಗರು ಧ್ವನಿಯೆತ್ತಬೇಕು’ ಎಂದು ಹೇಳಿದರು.