‘ಶಿಕ್ಷಣ, ಆಸ್ಪತ್ರೆ ಮತ್ತು ಹಾಸ್ಟೆಲ್ ವ್ಯವಸ್ಥೆಯನ್ನು ಕಲ್ಪಿಸಿರುವಒಕ್ಕಲಿಗರ ಸಂಘಕ್ಕೆ ಬಹಳ ಒಳ್ಳೆಯ ಹೆಸರಿತ್ತು. ಆದರೆ, ಆ ಘನತೆಗೆ ಕೆಲವರಿಂದ ಧಕ್ಕೆಯಾಗಿದೆ. ಮುಂದಿನ ಜನಾಂಗಕ್ಕೆ ಒಕ್ಕಲಿಗರ ಸಂಘ ಉಳಿಯಬೇಕಿದೆ. ಒಳ್ಳೆಯ ಸಂಘ ಸಂಸ್ಥೆಗಳು ಉಳಿಯದಿದ್ದರೆ ಸಮಾಜವೇ ಹಾಳಾಗುತ್ತದೆ’ ಎಂದು ಮೌಖಿಕವಾಗಿ ಕಳವಳ ವ್ಯಕ್ತಪಡಿಸಿದ ನ್ಯಾಯಪೀಠ, ‘ಆಡಳಿತಾಧಿಕಾರಿ ಒಂದು ವೇಳೆ ಸಮರ್ಪಕ ಉತ್ತರ ನೀಡದಿದ್ದರೆ ಗಂಭೀರವಾದ ಕಾನೂನು ಪರಿಣಾಮ ಎದುರಿಸಬೇಕಾಗುತ್ತದೆ’ ಎಂದು ಎಚ್ಚರಿಕೆ ನೀಡಿದೆ.