‘ಹಿಂದೂಗಳ ಹತ್ಯೆಯಾದಾಗ ಮಾತನಾಡದ ಕಾಂಗ್ರೆಸ್ನ ನಾಯಕರಿಗೆ ಈಗ ನಾನೂ ಹಿಂದೂ ಎಂದು ಹೇಳುವ ಪರಿಸ್ಥಿತಿ ಬಂದಿದೆ. ಅಧಿಕಾರ ಇದ್ದಾಗ ವೀರಶೈವ–ಲಿಂಗಾಯತರನ್ನು ಒಡೆಯುವ ಪ್ರಯತ್ನ ಮಾಡಿದರು. ಕಾಂಗ್ರೆಸ್ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಅವರ ಮನೆಯೊಳಗೆ ಬೆಂಕಿ ಹಚ್ಚಿದಾಗ ಅಲ್ಪಸಂಖ್ಯಾತರ ಮತ ತಪ್ಪುತ್ತೆ ಎಂಬ ಕಾರಣಕ್ಕೆ ದಲಿತ ಶಾಸಕನ ನೆರವಿಗೆ ಕಾಂಗ್ರೆಸ್ ಬರಲಿಲ್ಲ’ ಎಂದು ಟೀಕಿಸಿದರು. ಯಡಿಯೂರಪ್ಪ ಅವರನ್ನು ನೆನಪಿಸಿಕೊಂಡು ಗದ್ಗದಿತರಾದ ಜಗಳೂರು ಶಾಸಕ ಎಸ್.ವಿ. ರಾಮಚಂದ್ರ, ‘ಯಡಿಯೂರಪ್ಪ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂಬುದು ನೋವಿನ ಸಂಗತಿ. ಆದರೆ, ಅವರ ಮಗ ಬಿ.ವೈ. ವಿಜಯೇಂದ್ರ ನಮ್ಮ ನಾಯಕರಾಗಿರುತ್ತಾರೆ ಎಂಬುದು ಸಂತಸದ ಸಂಗತಿ’ ಎಂದರು.