ವಿಷಯ ಪ್ರಸ್ತಾಪಿಸಿದ ಶ್ರೀರಂಗಪಟ್ಟಣ ಶಾಸಕ ಶ್ರೀಕಂಠಯ್ಯ, ನಮಗೆ ಯಾರಿಗೂ ಆಮ್ಲಜನಕ ಸಿಲಿಂಡರ್ ದೊರೆಯುತ್ತಿಲ್ಲ. ಸಂಸದರು ತಮ್ಮ ಸ್ವಂತ ಹಣದಲ್ಲಿ ಜಿಲ್ಲೆಗೆ ಸಿಲಿಂಡರ್ ಒದಗಿಸುತ್ತಿದ್ದಾರೆ ಎಂದು ಮಾಧ್ಯಮಗಳಲ್ಲಿ, ಜಾಲತಾಣಗಳಲ್ಲಿ ವರದಿ ಬರುತ್ತಿದೆ, ಸಂಸದರಿಗೆ ಮಾತ್ರ ಹೇಗೆ ಜಂಬೋ ಸಿಲಿಂಡರ್ ದೊರೆಯುತ್ತಿವೆ ಎಂದು ಪ್ರಶ್ನಿಸಿದರು.