1943ರಲ್ಲಿ ಸಿದ್ದಾಪುರದಲ್ಲಿ ಜನಿಸಿದ ಅವರು ಕಲಿತದ್ದು ಪಿಯುಸಿವರೆಗೆ ಮಾತ್ರ. ಆದರೆ, ಉಮ್ಮತ್ತಾಟ್ ಅನ್ನು 1984ರಿಂದ ಹರಡುವ ಪ್ರಯತ್ನ ಆರಂಭಿಸಿದರು. ಕಾವೇರಿ ಕಲಾ ವೃಂದವನ್ನು ಸ್ಥಾಪಿಸಿ ಗೋವಾದಿಂದ ಆರಂಭವಾದ ಅವರ ಕಲಾಯಾತ್ರೆ ಹಿಮಾಚಲ ಪ್ರದೇಶ, ಜಮ್ಮು ಮತ್ತು ಕಾಶ್ಮೀರ, ಒಡಿಸ್ಸಾ, ಮಿಜೋರಾಂ, ಮಹಾರಾಷ್ಟ್ರ, ಮಧ್ಯಪ್ರದೇಶ, ಪಂಜಾಬ್ ಸೇರಿದಂತೆ ದೇಶದ ಉದ್ದಗಲಕ್ಕೂ ಸಾಗಿದೆ.