ಬಿ.ಎಂ.ಶ್ರೀ.ಪ್ರತಿಷ್ಟಾನದ ಅಧ್ಯಕ್ಷ ಬೈರಮಂಗಲ ರಾಮೇಗೌಡ,‘ಭಾರತದ ಯಾವುದೇ ರಾಜ್ಯಗಳಿಗೆ ಬದುಕು ಕಟ್ಟಿಕೊಳ್ಳಲು ಹೋಗುವ ಪ್ರತಿಯೊಬ್ಬ ಅನ್ಯಭಾಷಿಕರು ಮೊದಲು ಅಲ್ಲಿನ ಭಾಷೆ, ಸಂಸ್ಕೃತಿಗಳೊಂದಿಗೆ ನಂಟು ಬೆಳೆಸಿಕೊಳ್ಳಬೇಕು. ರಾಜ್ಯಕ್ಕೆ ಶಿಕ್ಷಣ, ವೃತ್ತಿ ಹಾಗೂ ಬದುಕು ಅರಸಿ ಬರುವವರು ಮೊದಲು ಕನ್ನಡಿಗರಾಗಬೇಕು’ ಎಂದರು.